ನಿಗೂಢ

ಏನಿದು? ಮಾಯೆ
ಸೃಷ್ಠಿಯ ಛಾಯೆ
ಎಲ್ಲಿಂದ ಎಲ್ಲಿಯವರೆಗೆ
ಹರಡಿದೆ ಜಗತ್ತಿನ ಛಾಯೆ
ಯಾರಾತ? ಎಲ್ಲಿಡಗಿಹನಾತ?
ಸೃಷ್ಠಿಯ ರಹಸ್ಯವ ತಿಳಿಸದಾತ?
ಕತ್ತೆತ್ತಿದರೆ ನೀಲಾಕಾಶ
ಅಸಂಖ್ಯ ತಾರೆಗಳ ಇತಿಹಾಸ
ಸೂರ್ಯ ಚಂದ್ರ ಗ್ರಹಗಳ ಪರಿವೇಷ
ನದಿ ಸಾಗರ ಸಂಗಮ ಸಮಾವೇಷ
ಎಲ್ಲವೂ ಗೂಡ, ನಿಗೂಢ
ಯಾವ ಶಕ್ತಿಯ ಕೈವಾಡ
ವೃಕ್ಷದೊಳಗೆ ಬೀಜವೋ
ಬೀಜದೊಳಗೆ ವೃಕ್ಷವೋ
ಮಂಜಿನ ಒಡಲಲ್ಲಿ
ಕುದಿಯುವ ವಾರಿಧಿ.
ಉರಿಯುವ ನೆರಳಲ್ಲಿ
ತಣ್ಣನೆಯ ಜಲದಿ
ಕಣ್ಣಿಗರಿವಾಗದ ಕೌತುಕ
ಸೃಷ್ಠಿದಾತನ ಕೈಚಳಕ
ಅನಂತ ಸಾಗರದೊಳಗೆ
ಮುತ್ತು ರತ್ನವ ಚೆಲ್ಲಿದ
ವಸುಂಧರೆಯ ಗರ್ಭದಿ
ಕನಕವ ಕರಗಿಸಿದ.
ಮಾನವನ ಎದೆಯೊಳಗೆ
ಅರಿಷಡ್ವರ್ಗಗಳ ತುಂಬಿಸಿ.
ಹಣ ಅಧಿಕಾರ ಕೀರ್ತಿ ಮುಂದಿರಿಸಿ
ಮಾಯಾಮೃಗವನ್ನಾಗಿಸಿ
ಆಡಿಸುವ ಸೂತ್ರಧಾರ
ಯಾರೋ ಅವನ್ಯಾರೋ
ಏನಿದು ಮಾಯೆ?
ಸೃಷ್ಠಿಯ ಛಾಯೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಚನ ವಿಚಾರ – ಯಾರೂ ಇಲ್ಲವೆಂದು
Next post ನಾವು ಗೆಳೆಯರು ಹೂವು ಹಣ್ಣಿಗೆ

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

cheap jordans|wholesale air max|wholesale jordans|wholesale jewelry|wholesale jerseys